ಸನ್ಮಾನ್ಯ ಎಲ್ಲ ಸಹಕಾರಿ ಬಂಧುಗಳಿಗೆ ನನ್ನ ಅನಂತ ವಂದನೆಗಳು.
ನಮ್ಮ ಪೂರ್ವಜರ ಪರಿಶ್ರಮದಿಂದ ದಿನಾಂಕ ೧೦ ನೇ ಫೆಬ್ರುವರಿ ೧೯೧೯ ರ ಶುಭ ದಿನದಂದು ನಮ್ಮ ಬ್ಯಾಂಕು ಜಿಲ್ಲಾ ಕೇಂದ್ರ ಸ್ಥಳವಾದ ಬೆಳಗಾವಿಯಲ್ಲಿ ಶುಭಾರಂಭ ಮಾಡಿತು. ಒಕ್ಕಲುತನ ಪತ್ತಿನ ಸಹಕಾರಿ ಸಂಘಗಳ ಮುಖಾಂತರ ರೈತರಿಗೆ ಸಾಲ ಪೂರೈಸುವುದೇ ಅಂದಿನ ಉದ್ದೇಶವಾಗಿತ್ತು. ಪ್ರಾರಂಭದಲ್ಲಿ ೦೯ ಸಹಕಾರಿ ಸಂಘಗಳನ್ನು ಹಾಗೂ ೨೬ ಜನ ಷೇರುದಾರರನ್ನು ಸದಸ್ಯರನ್ನಾಗಿ ಮಾಡಿಕೊಂಡು ಬ್ಯಾಂಕು ತನ್ನ ಕಾರ್ಯವನ್ನು ಆರಂಭಿಸಿತು. ಆಗ ಬ್ಯಾಂಕಿನ ದುಡಿಯುವ ಬಂಡವಾಳ ರೂ:೧೩,೦೪೩=೦೦ ಮಾತ್ರ ಸಂಗ್ರಹವಾಗಿತ್ತು. ಬ್ಯಾಂಕು ಸತತ ೧೦೬ ವರ್ಷಗಳ ಕಾಲ ಸಮಾಜದ ಎಲ್ಲ ವರ್ಗದ ಜನರಿಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ವಿಶೇಷವಾಗಿ ಜಿಲ್ಲೆಯ ರೈತಾಪಿ ಜನರಿಗೆ ಸೇವೆ ಸಲ್ಲಿಸುತ್ತಾ ಮುನ್ನಡಿದಿದೆ. ದೇಶದ ಪ್ರತಿಷ್ಠಿತ ಬ್ಯಾಂಕು ಎಂಬ ಹೆಗ್ಗಳಿಕೆಯೊಂಗೆ ಗುರುತಿಸಿಕೊಂಡಿರುವ ನಮ್ಮ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ನಿಸ್ವಾರ್ಥ, ಪ್ರಾಮಾಣಿಕ ಅನುಭವಿ ಹಾಗೂ ದಕ್ಷ ಸಹಕಾರಿ ಧುರೀಣರ ಮಾರ್ಗದರ್ಶನ ಹಾಗೂ ಶ್ರೀರಕ್ಷಯಿದ್ದು, ಬ್ಯಾಂಕು ಈಗಾಗಲೇ ಶತಮಾನಕ್ಕಿಂತ ಹೆಚ್ಚು ಕಾಲ ತನ್ನ ಸೇವೆಯನ್ನು ಪೂರೈಸಿ, ಶತಮಾನೋತ್ಸವದ ಆಚರಣೆಯ ಘಳಿಗೆಯನ್ನು ಕಾಯುತ್ತಾ ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ.
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷನಾಗಿ ನಾನು ಅಧಿಕಾರವಹಿಸಿಕೊಂಡಿದ್ದು, ಬ್ಯಾಂಕಿನ ಯಾವತ್ತೂ ಆಡಳಿತ ಮಂಡಳಿಯ ಸದಸ್ಯರಿಗೆ ಜಿಲ್ಲೆಯ ಹಿರಿಯ ಹಾಗೂ ಕಿರಿಯ ಧುರೀಣರಿಗೆ ಸಹಕಾರ ಇಲಾಖೆಯ ಎಲ್ಲ ಅಧಿಕಾರಿಗಳಿಗೆ, ಬ್ಯಾಂಕಿನ ಸಮಸ್ತ ಗ್ರಾಹಕರಿಗೆ ಹಾಗೂ ಬ್ಯಾಂಕಿನ ಪರಿಸ್ಥಿತಿಗನುಗುಣವಾಗಿ ಸ್ಪಂದಿಸುವ ಸಿಬ್ಬಂದಿ ವರ್ಗದವರಿಗೆ ನನ್ನ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
…ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ತನ್ನ ವಿಶಿಷ್ಟತೆ ಹಾಗೂ ಪರಂಪರೆಯನ್ನು ಮುಂದುವರೆಸಿಕೊAಡು ಬಂದಿದೆ ಎಂದು ತಿಳಿಸಲು ನನಗೆ ಹೆಮ್ಮೆ ಎನಿಸುತ್ತದೆ. ನಮ್ಮ ಬ್ಯಾಂಕು ಖಾಸಗಿ ಹಾಗೂ ವಾಣಿಜ್ಯ ಬ್ಯಾಂಕುಗಳೊAದಿಗೆ ತೀವ್ರ ಪೈಪೋಟಿ ಹೊಂದಿದ್ದು ಬ್ಯಾಂಕಿAಗ್ ಕ್ಷೇತ್ರದಲ್ಲಿಯ ಆಧುನಿಕ ಬದಲಾವಣೆಗೆ ತಕ್ಕಂತೆ ಜಿಲ್ಲೆಯಲ್ಲಿನ ಎಲ್ಲ ೧೦೭ ಶಾಖೆಗಳು ಗಣಕೀಕರಣ ಹೊಂದಿ ಅವು ಕೋರ್ ಬ್ಯಾಂಕಿAಗ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸದರಿ ವ್ಯವಸ್ಥೆಯಿಂದ ಆನ್ಲೈನ್ ಮೂಲಕ ದೇಶದ ಯಾವುದೇ ಬ್ಯಾಂಕಿನ ಗ್ರಾಹಕರಿಗೆ ಕ್ಷಣಾರ್ಧದಲ್ಲಿ ಹಣ ಕಳುಹಿಸುವ ಅಥವಾ ನಮ್ಮ ಗ್ರಾಹಕರು ಯಾವುದೇ ಬ್ಯಾಂಕಿನಿAದ ಹಣ ಸ್ವೀಕರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬ್ಯಾಂಕು ಪ್ರಸ್ತುತ ವರ್ಷದಲ್ಲಿ ಎಲ್ಲ ಸಹಕಾರಿಗಳ ಮಾರ್ಗದರ್ಶನದಲ್ಲಿ ಪ್ರಗತಿ ಸಾಧಿಸಿದ್ದು ರೂ:೬೦೮೭ ಕೋಟಿ ಠೇವು ಸಂಗ್ರಹಿಸಿ ರೂ:೫೮೯೩ ಕೋಟಿ ಸಾಲ ಹಂಚಿಕೆ ಮಾಡಿ ರೂ:೮೫೯೩ ಕೋಟಿ ದುಡಿಯುವ ಬಂಡವಾಳ ಹೊಂದಿ ಕರ್ನಾಟಕದಲ್ಲಿ ಅತ್ಯುತ್ತಮ ಬ್ಯಾಂಕು ಎಂಬ ಹೆಗ್ಗಲಿಕೆಗೆ ಪಾತ್ರವಾಗಿದೆ.
ಬ್ಯಾಂಕು ಕೃಷಿ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಜಿಲ್ಲೆಯ ೪,೯೨,೫೮೬ ರೈತ ಸದಸ್ಯರಿಗೆ ರೂ:೩೪೭೫ ಕೋಟಿ ಕಿಸಾನ ಕ್ರೆಡಿಟ್ ಕಾರ್ಡ ಮುಖಾಂತರ ಶೂನ್ಯ ಬಡ್ಡಿದರದ ಬೆಳೆಸಾಲ ಹಂಚಿದ್ದು ಇದರ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡಿರುವ ಎಲ್ಲ ಸವಲತ್ತುಗಳನ್ನು ರೈತ ಸದಸ್ಯರಿಗೆ ಒದಗಿಸಲಾಗಿದೆ. ಅದರಂತೆ ಜಿಲ್ಲೆಯ ೭ ಸಹಕಾರಿ ಸಕ್ಕರೆ ಕಾರಖಾನೆಗಳಿಗೆ, ೧೪ ಖಾಸಗಿ ಸಕ್ಕರೆ ಕಾರಖಾನೆಗಳಿಗೆ ಒಟ್ಟು ರೂ.೧,೪೯೫ ಕೋಟಿ ೮೦ ಲಕ್ಷ ಸಾಲ ಹಂಚಿಕೆ ಮಾಡಿದ್ದು ಇದರಲ್ಲಿ ರೂ:೮೬೦ ಕೋಟಿ ದುಡಿಯುವ ಬಂಡವಾಳ ರೂ:೬೩೬ಕೋಟಿ ಅವಧಿ ಸಾಲ ಹಂಚಿಕೆ ಮಾಡಿ ಜಿಲ್ಲೆಯನ್ನು ಸಕ್ಕರೆ ಜಿಲ್ಲೆಯನ್ನಾಗಿ ಮಾಡಲು ಬ್ಯಾಂಕು ಪ್ರಮುಖ ಪಾತ್ರವಹಿಸಿದೆ.
ಬ್ಯಾಂಕು ಈ ಕೆಳಕಾಣಿಸಿದ ಯೋಜನೆಗಳನ್ನು ಹೊಂದಿದ್ದು, ಅವು ಸದ್ಯ ಜಾರಿಯಲ್ಲಿರುತ್ತವೆ.
೧. ಬ್ಯಾಂಕು ಉಳಿತಾಯ ಖಾತೆ ಹೊಂದಿದ ಗ್ರಾಹಕರಿಗೆ ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸಿದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದೆ.
೨. ಹೈನುಗಾರಿಕೆಗೆ ಉತ್ತೇಜನ ನೀಡುವ ಕುರಿತು ಆಯ್ದ ಪಿಕೆಪಿಎಸ್ ಸಂಘಗಳ ಮೂಲಕ ರೈತ ಸದಸ್ಯರುಗಳಿಗೆ ಹಸು ಹಾಗೂ ಎಮ್ಮೆ ಖರೀದಿಸಲು ಮಾಧ್ಯಮಾವಧಿ ಸಾಲ ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
೩. ಕೃಷಿಗೆ ಪೂರಕವಾದ ನೀರಾವರಿ ಸೌಲಭ್ಯ ಕಲ್ಪಿಸಲು ವಿದ್ಯತ್ ಮೋಟಾರ್ ಹಾಗೂ ಪೈಪಲೈನ್ ಅಳವಡಿಸಲು ಮಾಧ್ಯಮಾವಧಿ ಸಾಲ ಯೋಜನೆ ಜಾರಿಗೊಳಿಸಿದೆ.
೪. ಗ್ರಾಹಕರಿಗೆ ಖಖಿಉS, ಓಇಈಖಿ, ಆಃಖಿಐ & ಂಃPS ಸೌಲಭ್ಯ ಕಲ್ಪಿಸಲಾಗಿದೆ.
೫. PಈಒS ಸೌಲಭ್ಯ ಒದಗಿಸಿಕೊಂಡಿದ್ದು, ಕೇಂದ್ರ ಸರ್ಕಾರದ ಯೋಜನೆಯಡಿ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಗೃಹಲಕ್ಷಿö್ಮÃ ಹಾಗೂ ಇನ್ನಿತರ ಬಡವರ್ಗದ ಜನರಿಗೆ ನೀಡುವ ಸೌಲಭ್ಯಗಳು ನೇರವಾಗಿ ಅವರ ಖಾತೆಗೆ ಜಮಾ ಆಗುತ್ತಿವೆ.
೬. ಎಲ್ಲಾ ಶಾಖೆಗಳ ವ್ಯವಹಾರಗಳನ್ನು ಕೋರ್ ಬ್ಯಾಂಕಿAಗ್ನಲ್ಲಿ ಅಳವಡಿಸಿದ್ದು, ಗ್ರಾಹಕರಿಗೆಇ ಎಲ್ಲ ಶಾಖೆಗಳಿಗೆಂದ ಆನ್ಲೈನ್ ಮೂಲಕ ದೇಶದ ಯಾವುದೇ ಬ್ಯಾಂಕಿನ ಗ್ರಾಹಕರಿಗೆ ಕ್ಷಣಾರ್ಧದಲ್ಲಿ ಹಣ ಕಳಿಸುವ ಅಥವಾ ನಮ್ಮ ಗ್ರಾಹಕರು ಯಾವುದೇ ಬ್ಯಾಂಕಿನಿAದ ಹಣ ಸ್ವೀಕರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
೭. ನಮ್ಮ ಬ್ಯಾಂಕು ೩,೩೬,೫೬೮ ರೂಪೆ ಡೆಬಿಟ್ ೩೫೮೯೩ ಕೆಸಿಸಿ ಡೆಬಿಟ್ ಕಾರ್ಡಗಳನ್ನು ಬ್ಯಾಂಕಿನ ಗ್ರಾಹಕರಿಗೆ ಪೂರೈಸಿದ್ದು, ಈ ಕಾರ್ಡಗಳ ಮುಖಾಂತರ ಯಾವುದೇ ಬ್ಯಾಂಕಿನ ಎ.ಟಿ.ಎಂ ಗಳಲ್ಲಿ ಹಣ ಪಡೆಯಬಹುದು ಅದರಂತೆ, ಈ ಕಾರ್ಡಗಳಿಂದ ಯಾವುದೇ ವ್ಯವಹಾರಗಳನ್ನು PಔS & ಇ.ಅಔಒ ಮುಖಾಂತರ ಮಾಡುವ ಅವಕಾಶ ಕಲ್ಪಿಸಲಾಗಿದೆ.
೮. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖಾಂತರ
ಅ) ಟ್ಯಾಕ್ಟರ್ ಖರೀದಿಗಾಗಿ ಮಾಧ್ಯಮಿಕ ಸಾಲವನ್ನು ೨೦೫೩ ರೈತ ಸದಸ್ಯರಿಗೆ ರೂ:೧೬೩ ಕೋಟಿ ೨ ಲಕ್ಷ ನೀಡಿದೆ.
ಬ) ಪೈಪಲೈನ್ ಸಾಲವನ್ನು ೩೬೩ ರೈತ ಸದಸ್ಯರಿಗೆ ರೂ:೧೬ ಕೋಟಿ ೭೩ ಲಕ್ಷ ನೀಡಿದೆ.
ಕ) ಹೈನುಗಾರಿಕೆ ಉದ್ದೇಶಕ್ಕೆ ಸಾಲವನ್ನು ೬೫೯ ರೈತರಿಗೆ ರೂ:೩ ಕೋಟಿ ೮೯ ಲಕ್ಷ ನೀಡಿದೆ.
೯. ಬ್ಯಾಂಕಿನ ಸದಸ್ಯತ್ವ ಹೊಂದಿದ ಪಿಕೆಪಿಎಸ್ ಸಂಘಗಳಿಗೆ ಪ್ರತಿ ಸಂಘಕ್ಕೆ ರೂ:೧.೦೦ ಲಕ್ಷ ರಂತೆ ಒಟ್ಟು ೪೦೯ ಪಿಕೆಪಿಎಸ್ ಸಂಘಗಳಿಗೆ ಒಟ್ಟು ರೂ:೪,೦೯,೦೦,೦೦೦/- ಮೂಲಭೂತ ಸೌಕರ್ಯ ಹೊಂದಲು ಬ್ಯಾಂಕಿನಿAದ ಹಣಕಾಸು ಸೌಲಭ್ಯ ಒದಗಿಸಲಾಗಿದೆ.
೧೦. ಭಾರತ ಸರ್ಕಾರವು ನಬಾರ್ಡ ಮುಖಾಂತರ ವಿಶೇಷ ಆರ್ಥಿಕ ಯೋಜನೆಯಲ್ಲಿ ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ನಿಧಿ (ಂgಡಿiಛಿuಟಣuಡಿe Iಟಿಜಿಡಿಚಿsಣಡಿuಛಿಣuಡಿe ಈuಟಿಜ) ಮತ್ತು ಪಿಕೆಪಿಎಸ್ ಸಂಘಗಳನ್ನು ಬಹು ಉದ್ದೇಶ ಸೇವಾ ಕೇಂದ್ರ (ಒuಟಣi Seಡಿviಛಿe ಅeಟಿಣeಡಿ) ಗಳನ್ನಾಗಿ ಮಾರ್ಪಡಿಸಲು ಈ ೨ ಯೋಜನೆಗಳನ್ನು ಸಂಯೋಜಿಸಿ ೪% ರ ಬಡ್ಡಿದರದಲ್ಲಿ ಪಿಕೆಪಿಎಸ್ ಸಂಘಗಳಿಗೆ ಉಗ್ರಾಣ (ಗೋಡಾವನ) ನಿರ್ಮಿಸಲು, ವಾಣಿಜ್ಯ ಮಳಿಗೆ ಕಟ್ಟಲು, ಶೀತ ಗೃಹ (ಅoಟಜ Sಣoಡಿಚಿge) ನಿರ್ಮಿಸಲು, ಕೃಷಿ ಸೇವಾ ಕೇಂದ್ರ ನಿರ್ಮಿಸಲು ಹಾಗೂ ಕೃಷಿ ಉಪಕರಣಗಳನ್ನು ಖರೀದಿಸಲು ಸಾಲ ಹಾಗೂ ಸಹಾಯಧನ ನೀಡುವ ಯೋಜನೆಯನ್ನು ಜಾರಿಗೊಳಿಸಿರುತ್ತಾರೆ. ಈ ಯೋಜನೆಯಡಿ ನಮ್ಮ ಜಿಲ್ಲೆಯಿಂದ ೧೬೬ ಪಿಕೆಪಿಎಸ್ ಸಂಘಗಳಿಗೆ ರೂ:೪೬ ಕೋಟಿ ೪೭ ಲಕ್ಷ ಸಾಲ ಮಂಜೂರಿಸಿದೆ ಹಾಗೂ ರಾಜ್ಯದಲ್ಲಿಯೇ ಅತೀ ಹೆಚ್ಚು ಸಂಘಗಳಿಗೆ ಸಾಲ ವಿತರಿಸಿದ ಬ್ಯಾಂಕು ನಮ್ಮದಾಗಿದೆ.
ನಮ್ಮ ಜಿಲ್ಲೆಯಲ್ಲಿ ಒಟ್ಟು ೨೯,೮೧೦ ಸ್ವಸಹಾಯ ಸಂಘಗಳು ರಚನೆಯಾಗಿದ್ದು, ಈ ಪೈಕಿ ಬ್ಯಾಂಕಿನಲ್ಲಿ ೨೩,೮೫೪ ಹಾಗೂ ೫೯೫೬ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುತ್ತದೆ. ಇವುಗಳ ಪೈಕಿ ಮೊದಲನೇ ಸಲ ಬ್ಯಾಂಕಿನಿAದ ೧೨,೨೨೧ ಸ್ವ ಸಹಾಯ ಗುಂಪುಗಳಿಗೆ ರೂ:೧೦೦ ಕೋಟಿ ೨೧ ಲಕ್ಷ ೬೫ ಸಾವಿರ ಸಾಲ ನೀಡಲಾಗಿದೆ. ಹೀಗೆ ಒಂದು ಸಲ ಹಾಗೂ ಒಂದಕ್ಕಿAತ ಹೆಚ್ಚು ಸಲ ಒಟ್ಟು ೨೨,೭೩೦ ಸ್ವಸಹಾಯ ಗುಂಪುಗಳಿಗೆ ರೂ:೪೫೧ ಕೋಟಿ ೨೨ ಲಕ್ಷ ೫೭ ಸಾವಿರ ಸಾಲ ನೀಡಲಾಗಿದೆ. ಇದರ ಸಾಲ ವಸೂಲಾತಿ ಪ್ರಮಾಣ ೯೮.೮೭% ರಷ್ಟು ಇರುತ್ತದೆ. ಇದರ ಹೊರಬಾಕಿ ಸಾಲ ದಿನಾಂಕ:೩೧.೦೩.೨೦೨೫ ಕ್ಕೆ ಒಟ್ಟು ೨,೩೯೪ ಸಂಘಗಳಿAದ ರೂ:೪೪ ಕೋಟಿ ೯೬ ಲಕ್ಷ ೯೯ ಸಾವಿರ ಇರುತ್ತದೆ.
ನಮ್ಮ ಬ್ಯಾಂಕಿನಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ ೨೫೮೦ ಉಳಿತಾಯ ಖಾತೆದಾರರಿಂದ, ಪ್ರತಿಯೊಂಬ್ಬರಿAದ ರೂ:೪೩೬/- ರಂತೆ ವಿಮಾ ಕಂತು ಪಡೆದುಕೊಂಡು ರೂ:೧೧ ಲಕ್ಷ ೨೬ ಸಾವಿರ ವಿಮೆ ಹಣ ಪಾವತಿಸಿದ್ದು, ಇದರ ಪೈಕಿ ೫೨ ಜನ ಮೃತ ಖಾತೆದಾರರ ವಾರಸುದಾರರಿಗೆ ತಲಾ ರೂ:೨ ಲಕ್ಷದಂತೆ ಒಟ್ಟು ರೂ: ೧ ಕೋಟಿ ೧೬ ಲಕ್ಷ ಕ್ಲೇಮ ಸೌಲಭ್ಯ ದೊರೆತಿದೆ. ಅದರಂತೆ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ಒಟ್ಟು ೮೪೫೩ ಉಳಿತಾಯ ಖಾತೆದಾರರಿಂದ ವಿಮಾ ಕಂತು ರೂ:೨೦/- ಪಡೆದುಕೊಂಡು ರೂ:೧ ಲಕ್ಷ ೬೯ ಸಾವಿರ ಪಾವತಿಸಿದ್ದು ೩ ಜನ ಸದಸ್ಯರಿಗೆ ತಲಾ ೨ಲಕ್ಷದಂತೆ ಒಟ್ಟು ರೂ: ೬ಲಕ್ಷ ಕ್ಲೇಮ ಸೌಲಭ್ಯ ನೀಡಲಾಗಿದೆ.
ಈಗ ಬ್ಯಾಂಕು ಮೊಬೈಲ ಬ್ಯಾಂಕಿAಗ್ ಸೌಲಭ್ಯವನ್ನು ಅಳವಡಿಸಲು ಭಾರತೀಯ ರಿಝರ್ವ ಬ್ಯಾಂಕ ನಿಂದ ಲೈಸನ್ಸ್ ಪಡೆದುಕೊಂಡು, ಸದರಿ ಸೌಲಭ್ಯವನ್ನು ಜಾರಿಯಲ್ಲಿ ತಂದಿದ್ದು, ಜಿಲ್ಲೆಯ ಎಲ್ಲ ಗ್ರಾಹಕರು, ರೈತಾಪಿ ಜನರು ಹಾಗೂ ಸಂಘ ಸಂಸ್ಥೆಯವರು ಇದರ ಸದುಪಯೋಗ ಪಡೆದುಕೊಳ್ಳಲು ಕೋರುತ್ತೇನೆ.
ಕೇಂದ್ರ ಸರ್ಕಾರದ ಈ ಯೋಜನೆಗಳನ್ನು ಅಳವಡಿಸಿಕೊಳ್ಳಲು ಬ್ಯಾಂಕು ಜಿಲ್ಲೆಯಲ್ಲಿಯ ಪ್ರಾಥಮಿಕ
ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಪ್ರೋತ್ಸಾಹಿಸಿ ಸೂಕ್ತ ಮಾರ್ಗದರ್ಶನ ನೀಡುತ್ತಿದೆ.
• ವಿವಿದ್ದೋದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು LPG Distribution New Connection ಪಡೆಯುವ ಬಗ್ಗೆ
• ವಿವಿದ್ದೋದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು Permission to Convert Bulk Consumer Petrol Pump Operated by MPGACS into retail outlet new connection applied ಬಗ್ಗೆ
• ವಿವಿದ್ದೋದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು Jan Aushadhi Kendra For Accessi Medicines at Rural Level ಬಗ್ಗೆ
• ವಿವಿದ್ದೋದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು Fertilizer Distribution Center in Number ಬಗ್ಗೆ
• ವಿವಿದ್ದೋದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು Applied for rural Piped Water Supply muection (New Connection applied / Confirmed) ಬಗ್ಗೆ
• ವಿವಿದ್ದೋದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು World’s Largest grain Storage plan ಬಗ್ಗೆ
• ವಿವಿದ್ದೋದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು Common Service Center ಬಗ್ಗೆ
• ಸಂಘಗಳಿಗೆ ಗೋಡಾವನ ಕಟ್ಟಡ ಕಟ್ಟಲು AIF ಯೋಜನೆಯಡಿ 1% ರಿಯಾಯಿತಿ ಬಡ್ಡಿದರದಲ್ಲಿ ಸಾಲ ನೀಡುವ ಕುರಿತು.
~: ಬ್ಯಾಂಕು ಗ್ರಾಹಕರಿಗೆ ಒದಗಿಸುತ್ತಿರುವ ಸಾಲ ಸೌಲಭ್ಯಗಳು :~
• ಬ್ಯಾಂಕಿನ ಗ್ರಾಹಕರಿಗೆ ನಿವೇಶನ ಖರೀದಿಸಲು / ಮನೆ ಕಟ್ಟಲು/ ಮನೆ ಖರೀದಿಸಲು/ ಗೃಹ ಅಡಮಾನ ಸಾಲ ನೀಡಲಾಗುತ್ತಿದೆ.
• ಸರ್ಕಾರಿ, ಅರೆ ಸರ್ಕಾರಿ ನೌಕರಿಗೆ ವೇತನ ಆಧಾರಿತ ಸಾಲ ನೀಡಲಾಗುತ್ತಿದೆ.
• ಬ್ಯಾಂಕಿನ ಎಲ್ಲ ಗ್ರಾಹಕರಿಗೆ ದ್ವಿಚಕೆ ವಾಹನ ಹಾಗೂ ಕಾರು/ಟ್ರಕ್/ಜೆಸಿಬಿ/ಕಬ್ಬು ಕಟಾವ ಮಶಿನ್ ಹಾಗೂ ಇತರೆ ವಾಹನ ಖರೀದಿಸಲು ಸಾಲಗಳನ್ನು ನೀಡಲಾಗುತ್ತಿದೆ.
• ಬಂಗಾರದ ಆಭರಣಗಳ ಅಡವಿನ ಸಆಲ ಕೊಡಮಾಡುತ್ತಿದ್ದು, ಅದರ ಮಿತಿ ವೈಯಕ್ತಿಕವಾಗಿ ರಊ:10 ಲಕ್ಷದವರೆಗೆ ಇರುತ್ತದೆ.
• ಸಕ್ಕರೆ ಕಾರ್ಖಾನೆಗಳಿಗೆ, ಹೋಟೆಲ್ ಉದ್ದಿಮೆದಾರರಿಗೆ, ಬೃಹತ / ಮಧ್ಯಮ / ಸಣ್ಣ ಪ್ರಮಾಣದ ಕೈಗಾರಿಕೆ ನಿರ್ಮಾಣಕ್ಕಾಗಿ ವೈದ್ಯಕೀಯ ಸಲಕರಣಗೆಳನ್ನು ಖರೀದಿಸಲು ಹಾಗೂ ವಾಣಿಜ್ಯ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.
• ಬ್ಯಾಂಕು ಜಿಲ್ಲೆಯ ಬಡ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಾಲ (ಸಿಇಟಿ ರ್ಯಾಂಕಿAಗ್ ಆಧರಸಿ) ನೀಡಲಾಗುತ್ತಿದೆ.
• ಶಾಖೆ ಮತ್ತು ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಎಲ್ಲ ಶಾಖೆಗಳಲ್ಲಿ ಸಿಸಿ ಕ್ಯಾಮೆರಾ ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸಲಾಗಿದೆ.
ಬ್ಯಾಂಕಿAಗ್ ಕ್ಷೇತ್ರಕ್ಕೆ ಸಂಬAಧಿಸಿದ ತಂತ್ರಜ್ಞಾನವನ್ನು ಅಳವಡಿಸಿ ಗ್ರಾಹಕರಿಗೆ ಆಧುನಿಕ ವ್ಯವಸ್ಥೆಯ ಸೇವೆಯನ್ನು ನೀಡುವ ಉದ್ದೇಶವನ್ನು ಹೊಂದಿದ್ದು, ಅದರ ಅನ್ವಯವಾಗಿ ಈಗಾಗಲೇ NPCI ದೊಂದಿಗೆ ಚರ್ಚಿಸಿ IMPS ಸೇವೆಯನ್ನು ಬಳಸಿಕೊಂಡು ಗ್ರಾಹಕರಿಗೆ UPI ಅಂದರೆ, Phonepe, GPay, BBPS ಮುಂತಾದ ಸೇವೆಗಳನ್ನು ಶೀಘ್ರದಲ್ಲಿ ನೀಡಲಾಗುವುದು. ಈಗಾಗಲೇ ಆಯ್ದ ಸಂಘಗಳಿಗೆ Micro ATM ಒದಗಿಸಲಾಗಿದೆ.
NABARD & NSCD ಯೊಂದಿಗೆ ಚರ್ಚಿಸಿ ಇನ್ನೂ ಅನೇಕ ಸಾಲ ಸೌಲಭ್ಯಗಳನ್ನು ರೈತಾಪಿ ವರ್ಗಕ್ಕೆ ಒದಗಿಸಿ, ರೈತರ ಆರ್ಥಿಕ ಸ್ಥಿಸಿಯನ್ನು ಮೇಲೆತ್ತಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ನಮ್ಮ ಗ್ರಾಹಕರಿಗೆ Mutul Fund, Share, D Mat A/c ಮುಂತಾದ ಸೇವೆಗಳನ್ನು ಕಲ್ಪಿಸುವುದರೊಂದಿಗೆ ಆರ್ಥಿಕ ಸಾಕ್ಷರತೆಯನ್ನು ಬಲಪಡಿಸುವ ಉದ್ದೇಶವನ್ನು ಬ್ಯಾಂಕು ಹೊಂದಿರುತ್ತದೆ.
ಅಣ್ಣಾಸಾಹೇಬ ಶಂಕರ ಜೊಲ್ಲೆ
ಅಧ್ಯಕ್ಷರು
Near Central Bus Stand,
Old P B Road,
Belagavi, Karnataka 590016
0831-2466896
©2021. All Rights Reserved. Website updated: 27-10-2021
Privacy Policy